ಪ್ರಮುಖ ಸುದ್ದಿಗಳು
ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಗುಬ್ಬಿ ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ
ತುಮಕೂರು: ಅತಿ ಹೆಚ್ಚು ಅವಧಿಯಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ ನರೇಂದ್ರ ಮೋದಿಯವರನ್ನು ಅಭಿನಂದಿಸಿ, ಅವರಿಗೆ ಆಯುಷು, ಆರೋಗ್ಯ, ಮತ್ತಷ್ಟು ಸೇವೆ ಮಾಡುವ ಶಕ್ತಿ ದೊರೆಯಲೆಂದು ಪ್ರಾರ್ಥಿಸಿ ತಾಲೂಕು ಬಿಜೆಪಿಯಿಂದ ಗುಬ್ಬಿ ನಗರದ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿ ಸಂಭ್ರಮಾಚರಣೆ ನಂತರ S,D ದಿಲೀಪ್ ಕುಮಾರ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 12 ವರ್ಷ ಕಾಲ ಆಡಳಿತ ನಡೆಸಿ ಅತಿ ಹೆಚ್ಚು…
ಸರ್ಕಾರ ಜಮೀನು ಪಡೆಯಲು ಮುಂದಾದರೆ ಹೆಚ್ ಎ ಎಲ್ ಘಟಕದ ಮುಂದೆ ಉಗ್ರ ಹೋರಾಟ ರೈತರಿಂದ ಎಚ್ಚರಿಕೆ
ಗುಬ್ಬಿ : ಎಚ್ಎಎಲ್ ಘಟಕಕ್ಕೆ ಹೆಚ್ಚುವರಿಯಾಗಿ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಎಚ್ಎಎಲ್ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಪಟ್ಟಣದ ತಾಲೂಕು ಕಛೇರಿ ಮುಂಭಾಗ ನಿಟ್ಟೂರು ಹೋಬಳಿಯ ಹೆಚ್.ಎ.ಎಲ್. ಘಟಕಕ್ಕೆ ಹೊಂದಿಕೊಂಡಿರುವ ಸಮೀಪದ ಗ್ರಾಮಸ್ಥರು ತಾಲೂಕು ಕಛೇರಿ ಮುಂಭಾಗ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ವಿರುದ್ಧ ದಿಕ್ಕಾರ ಕೂಗುವ ಮೂಲಕ ಗ್ರಾಮಸ್ಥರು ಪ್ರತಿಭಟನೆ ನೆಡೆಸಿದರು. ಪ್ರತಿಭಟನಾಕಾರರಾದ ಮುಖಂಡ ಶಶಿಧರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಾಲೂಕಿನ ನಿಟ್ಟೂರು ಹೋಬಳಿಯ…
ಕೆಎಚ್ ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಾದಿಗ ಮುಖಂಡರಿಂದ ಒತ್ತಾಯ
ತುಮಕೂರು: ಮಾದಿಗ ಸಮುದಾಯದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿ ಕೆ ಎಚ್ ಮುನಿಯಪ್ಪನವರು ಸತತವಾಗಿ ಏಳು ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಸಮರ್ಥವಾದ ಅಧಿಕಾರವನ್ನು ನಿರ್ವಹಿಸಿಹಸುತ್ತ ಬಂದಿರುತ್ತಾರೆ ಅಂತಹ ಹಿರಿಯ ನಾಯಕರಿಗೆ ಕಾಂಗ್ರೆಸ್ ಪಕ್ಷ ಅವರನ್ನು ಉಪಮುಖ್ಯಮಂತ್ರಿ ಮಾಡುವಲ್ಲಿ ವಿಫಲವಾಗಿದ್ದು ಕಳೆದ ಬಾರಿಯೂ ಸಹ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಾದಿಗ ಸಮಾಜಕ್ಕೆ ಪ್ರಬಲವಾದ ಖಾತೆಯನ್ನು ನೀಡುವಲ್ಲಿ ಅನ್ಯಾಯವ್ಯಸಗಿದೆ ಇದನ್ನು ಕರ್ನಾಟಕ ಮಾದಿಗ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ಮಾದಿಗ ಮಹಾಸಭಾ ತುಮಕೂರು…
ಮಾತೃಶ್ರೀ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 91ನೇ ವರ್ಷದ ಪುಣ್ಯಸ್ಮರಣೆ
ತುಮಕೂರು : ಇಂದು ಭಾರತದ ಇತಿಹಾಸ ಕಂಡ ಅಪ್ರತಿಮ ಮಹಿಳೆ, ತ್ಯಾಗದ ಪ್ರತೀಕವಾದ ಮಾತೃಶ್ರೀ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 91ನೇ ವರ್ಷದ ಪುಣ್ಯತಿಥಿಯನ್ನು ಅಖಿಲ ಭಾರತ ಡಾ. ಅಂಬೇಡ್ಕರ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಇಂದು ತುಮಕೂರು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ…
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಕೆ ನಾಗರಾಜು
ತುಮಕೂರು : ಇತ್ತೀಚೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಕೆ ನಾಗರಾಜು ಅವರನ್ನು ಇಂದು ನಗರದ ಕುಣಿಗಲ್ ಮುಖ್ಯರಸ್ತೆಯಲ್ಲಿ ಸಂಭ್ರಮ ಪಾರ್ಟಿ ಹಾಲ್ ನಲ್ಲಿ ಛಲವಾದಿ ನೌಕರರ ಬಳಗದ ವತಿಯಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪನವರು ಮಾತನಾಡಿ ಚುನಾವಣೆಗೆ ಆರ್ಥಿಕವಾಗಿ ವ್ಯಯವಾಗಲಿದೆ ಅದನ್ನು ತಡೆಗಟ್ಟುವುದು ಮತ್ತು ನಾಗರಾಜು ಅವರು ಮಾಡಿಕೊಂಡು ಬಂದಿರುವ ಸೇವೆಯನ್ನು ಪರಿಗಣಿಸಿ ಶಿಕ್ಷಕರುಗಳು ಅವರನ್ನು ಅವಿರೋಧವಾಗಿ…
ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರನಿಂದ ಕುತಂತ್ರ ರಾಜಕಾರಣ’
ಷಡ್ಯಂತರಗಳಿಗೆ ಜಗ್ಗುವುದಿಲ್ಲ: ಜೆಡಿಎಸ್ ಮುಖಂಡ ನಾಗರಾಜು ತಿರುಗೇಟು ತುಮಕೂರು: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ತಮ್ಮ ವಿರುದ್ಧ ಷಡ್ಯಂತರ ನಡೆಸಿ ತಮ್ಮನ್ನು ರಾಜಕೀಯವಾಗಿ ಕುಗ್ಗಿಸುವ ಕುತಂತ್ರ ನಡೆಸಿದ್ದಾರೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖಂಡ ಬಿ.ಎಸ್. ನಾಗರಾಜು ಆರೋಪಿಸಿದರು. ಇಂದು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಮೊದಲು ತಮ್ಮ ಕಾರು ಚಾಲಕ, ಆಪ್ತ ಸಹಾಯಕರಾಗಿದ್ದು, ಈಗ ತಮ್ಮನ್ನು ಬಿಟ್ಟುಹೋಗಿರುವವರನ್ನು ಜೊತೆಯಾಗಿಸಿಕೊಂಡು ನನ್ನ…
ಭಾರತೀಯ ಸನಾತನ ಧರ್ಮ ಸಂಸ್ಕೃತಿ, ಸಂಸ್ಕಾರ ಉಳಿಸಬೇಕು. ಡಾ ನಾಗರಾಜ್ ಸ್ವಾಮಿ
ಗುಬ್ಬಿ : ಭಾರತೀಯ ಸನಾತನ ಧರ್ಮ ಸಂಸ್ಕೃತಿ, ಸಂಸ್ಕಾರ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶ್ರೀಮಠವು ನಿರಂತರವಾಗಿ ದಾರ್ಮಿಕ ಕೆಲಸ ಮಾಡುತ್ತಿದೆ ಎಂದು ಡಾ, ನಾಗರಾಜ ಸ್ವಾಮೀಜಿ ತಿಳಿಸಿದರು. ಗುಬ್ಬಿ ಹಾಗೂ ತುಮಕೂರು ಗಡಿಭಾಗದ ಸಿದ್ದಪ್ಪನ ಪಾಳ್ಯ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಸಮೇತ ಉಮಾಮಹೇಶ್ವರಿ ಸನ್ನಿಧಾನ ಹಾಗೂ ಶ್ರೀ ಶಿವ ಶನೇಶ್ವರ ಮಠದಲ್ಲಿ ಶ್ರೀ ಶಿವ ಶನೇಶ್ವರ ಜಯಂತಿ ಮತ್ತು ಮಠದ ಧರ್ಮಾಧಿಕಾರಿಗಳಾದ ಡಾ,ನಾಗರಾಜ ಗುರೂಜಿ ರವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಮಕ್ಕಳಿಗೆ ಪ್ರತಿಭಾ…
ಡಾ. ನಾಗರಾಜ್ ಗುರೂಜಿಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ಡಾ. ನಾಗರಾಜ್ ಗುರೂಜಿಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ತುಮಕೂರು : ತುಮಕೂರು ತಾಲ್ಲೂಕು, ಹೆಬ್ಬೂರು ಹೋಬಳಿಯ ಸಿದ್ಧಪ್ಪನಪಾಳ್ಯದಲ್ಲಿರುವ ಶ್ರೀ ಮಹಾಲಕ್ಷ್ಮೀ ಸಮೇತ ಉಮಾಮಹೇಶ್ವರಿ ಸನ್ನಿಧಾನದ ಶ್ರೀ ಶಿವಶನೈಶ್ಚರ ಸ್ವಾಮಿಯ ಜಯಂತಿ ಹಾಗೂ ಶ್ರೀ ಮಠದ ಧರ್ಮಾಧಿಕಾರಿ ಡಾ. ನಾಗರಾಜ್ ಗುರೂಜಿಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜಾ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಡಾ. ನಾಗರಾಜ್ ಗುರೂಜಿಯವರ ಹುಟ್ಟುಹಬ್ಬದ ಅಂಗವಾಗಿ ದಿನಾಂಕ 20-05-2026 ಗುರುವಾರ ಶ್ರೀ ಮಹಾಲಕ್ಷ್ಮೀ ಸಮೇತ ಉಮಾಮಹೇಶ್ವರಿ ದೇವರಿಗೆ ಬೆಳಿಗ್ಗೆ…
ಬೀದಿನಾಟಕ ಕಲಾ ತಂಡಗಳ ಸಂಕಷ್ಟಕ್ಕೆ ಸರ್ಕಾರ ಸಹಾಯ ನೀಡಬೇಕೆಂದು; ಗ್ಯಾರಂಟಿ ರಾಮಣ್ಣ ಒತ್ತಾಯ
ತುಮಕೂರು; ಜನರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ನಾಟಕಗಳ ರೂಪದಲ್ಲಿ ರಾಜ್ಯಾದ್ಯಂತ ಅರಿವು ಮೂಡಿಸುತ್ತಿರುವ ಕಲಾವಿದರು ಕಾರ್ಯಕ್ರಮಗಳಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಇತ್ತೀಚೆಗೆ ಸರ್ಕಾರದ ಯಾವುದೇ ಯೋಜನೆಗಳು ಬಾರದ ಕಾರಣ ಕಲಾವಿದರು ಕಂಗಾಲಾಗಿದ್ದಾರೆ ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕಲಾವಿದರ ಸಹಾಯಕ್ಕೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಗ್ಯಾರಂಟಿ ರಾಮಣ್ಣ ಅವರು ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ರಾಜ್ಯ…
ವಿದ್ಯಾನಿಧಿ ಕಾಲೇಜಿನಲ್ಲಿ ಸಿಇಟಿ ಓರಿಯೆಂಟೇಷನ್
ವಿದ್ಯಾನಿಧಿ ಕಾಲೇಜಿನಲ್ಲಿ ಸಿಇಟಿ ಓರಿಯೆಂಟೇಷನ್ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿಇಟಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಮೆಟ್ಟಿಲಾಗಿದೆ. ಕೇವಲ ಅಂಕಗಳಿಗಲ್ಲ, ಸರಿಯಾದ ಗುರಿ, ಸಮಯಪಾಲನೆ, ಶಿಸ್ತು ಮತ್ತು ಆತ್ಮವಿಶ್ವಾಸಕ್ಕೂ ಇದು ಪರೀಕ್ಷೆಯಾಗಿದೆ. ಪರಿಶ್ರಮ ಮತ್ತು ನಿರಂತರ ಅಭ್ಯಾಸ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್. ಬಿ. ಪ್ರದೀಪ್ ಕುಮಾರ್ ಹೇಳಿದರು. ಅವರು ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕೆ-ಸಿಇಟಿ, ಕಾಮೆಡ್-ಕೆ ಓರಿಯೆಂಟೇಷನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಕಾಲೇಜು…