ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯ ಅನುದಾನಿತ ಶಾಲಾಕಾಲೇಜು ಸಿಬ್ಬಂದಿ ಸಂಘದಿಂದ ಹೋರಾಟದ ಎಚ್ಚರಿಕೆ

ತುಮಕೂರು: ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಪ್ರಕಾರ ಸರ್ಕಾರ ರಾಜ್ಯದ ಎಲ್ಲಾ ಅನುದಾನಿತ ಶಾಲಾಕಾಲೇಜು ಸಿಬ್ಬಂದಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಲೇಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸುವುದಾಗಿ ರಾಜ್ಯ ಅನುದಾನಿತ ಶಾಲಾಕಾಲೇಜು ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಶನಿವಾರ ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ರಾಜ್ಯ ಅನುದಾನಿ ಶಾಲಾಕಾಲೇಜು ಪಿಂಚಣಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಿಂಚಣಿ ಹೋರಾಟದಲ್ಲಿ ತಾವು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಆಕ್ರೋಶಗೊಂಡು ಭಾವುಕರಾಗಿ ಹೇಳಿದರು….

Read More

ಸ್ತ್ರೀ ಶಕ್ತಿ ಮೆರೆಸುವ ಹಬ್ಬವೇ ದಸರಾ ಆಚರಣೆ: ಹೆಚ್.ಜಿ.ಚಂದ್ರಶೇಖರ್

ತುಮಕೂರು: ನಮ್ಮದು ಪುರುಷ ಪ್ರಧಾನ ಸಮಾಜ ಎಂದು ಮೇಲ್ನೋಟಕ್ಕೆ ಹೇಳಲಾದರೂ ಒಳನೋಟದಲ್ಲಿ ಸ್ತ್ರೀ ಪ್ರಧಾನವೇ. ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸ್ತ್ರೀ ಪಾತ್ರವೇ ಹೆಚ್ಚು. ದಸರಾ ಉತ್ಸವವೂ ಸ್ತ್ರೀ ಶಕ್ತಿ ಮೆರೆಯುವ ಹಬ್ಬ. ಹೀಗಾಗಿ ಶಕ್ತಿ ದೇವತೆಗಳ ಆರಾಧನೆಯೊಂದಿಗೆ ದಸರಾವನ್ನು ದೇಶದಲ್ಲಿ ವಿಶೇಷವಾಗಿ ಆಚರಿಸುತ್ತೇವೆ ಎಂದು ಕೈಗಾರಿಕೋದ್ಯಮಿ, ಟೂಡಾ ಮಾಜಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹೇಳಿದರು. ನಗರದ ಶ್ರೀರಾಮ ಮಂದಿರದಲ್ಲಿ ನಡೆದಿರುವ ತುಮಕೂರು ದಸರಾ ಸಮಿತಿಯ ಶುಕ್ರವಾರದ ದಸರಾ ಉತ್ಸವದಲ್ಲಿ ಮಲ್ಲಕಂಬಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು,…

Read More

ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ಪಾವಗಡ: ಪಳವಳ್ಳಿ ಕೆರೆಯಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದರಿಂದ ಕೆರೆಯಲ್ಲಿ ಬೆಳೆದಿರುವ ನೂರಾರು ಗಿಡಮರಗಳು ಬೀಳುವ ಹಂತ ತಲುಪಿದ್ದರು ಸಹಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕುಳಿತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ. ತಾಲ್ಲೂಕಿನ ಪಳವಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ, ಹಾಡಹಗಲೇ ರಾಜಾರೋಷವಾಗಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ಅನುಮತಿ ಪಡೆಯದೆ ಟ್ಯಾಕ್ಟರ್ ನಂಬರ್ KA 64 T 4103 ಹಾಗೂ ಜೆಸಿಬಿ ಬಳಸಿ ಸುಮಾರು…

Read More

ಮಾದಿಗರು ಬೇರೆ ಅಲ್ಲ ನಾಯಕರು ಬೇರೆ ಅಲ್ಲ ನಾವೆಲ್ಲರೂ ಒಂದೇ ಶಾಸಕ ಕೆ.ಎನ್.ರಾಜಣ್ಣ

ಮಧುಗಿರಿ: ಮಾದಿಗರು ಬೇರೆ ಅಲ್ಲ ನಾಯಕರು ಬೇರೆ ಅಲ್ಲ ನಾವೆಲ್ಲರೂ ಒಂದೇ ನಮ್ಮನಿಮ್ಮ ಬೆಡಗುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ನಮ್ಮ ಎರಡು ಜಾತಿಗಳಲ್ಲಿ ಮಾತ್ರ ಬೆಡಗುಗಳು ಒಂದೆಯಾಗಿರುವುದನ್ನು ಕಾಣಬಹುದು ಪುರಾತನ ಕಾಲದಲ್ಲಿ ನಾವೆಲ್ಲರೂ ಒಟ್ಟಿಗೆ ಬದುಕುತ್ತಿದ್ದೆವು ಈಗಲೂ ಅದನ್ನೆ ಮುಂದುವರೆಸಿಕೊಂಡು ಸಹಬಾಳ್ವೆ ನಡೆಸೋಣ ಎಂದು‌ ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು. ಮಧುಗಿರಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಬಳಿ ತಾಲ್ಲೂಕಿನ ಪೋಲೆನಹಳ್ಳಿ ಹಾಗೂ ಪಾವಗಡದ ಬೆಳ್ಳಿಬಟ್ಲು ಗ್ರಾಮಗಳಲ್ಲಿ ನಡೆದ ದಲಿತರ ಕಗ್ಗೊಲೆ ಘಟನೆಗಳನ್ನು ಖಂಡಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ,…

Read More

ಮನೆಗಳಲ್ಲಿ ಗೊಂಬೆ ಅಲಂಕಾರ ಮಾಡಿದವರಿಗೆ ಬಹುಮಾನ

ತುಮಕೂರು ದಸರಾ ಸಮಿತಿಯಿಂದ ಗೊಂಬೆಗಳ ಪ್ರದರ್ಶನ ಸ್ಪಧೆ   ತುಮಕೂರು: ಈ ನವರಾತ್ರಿಯಲ್ಲಿ ಮನೆಗಳಲ್ಲಿ ಗೊಂಬೆ ಅಲಂಕಾರ ಮಾಡಿರುವವರಿಗೆ ತುಮಕೂರು ದಸರಾ ಸಮಿತಿ ವಿಶೇಷ ಬಹುಮಾನ ಪಡೆಯುವ ಅವಕಾಶ ನೀಡಿದೆ. ದಸರಾದ ಸಾಂಪ್ರದಾಯಕ ಗೊಂಬೆ ಪ್ರದರ್ಶನವನ್ನು ಪ್ರೋತ್ಸಾಹಿಸಲು ಹೊಸ ತಲೆಮಾರಿನವರಿಗೆ ಅದರ ವಿಶೇಷತೆ ಪರಿಚಯಿಸಲು ಈ ಬಾರಿ ಮನೆಗಳಲ್ಲಿ ಬೊಂಬೆ ಅಲಂಕಾರ ಮಾಡಿರುವವರಿಗೆ ಸಮಿತಿಯ ದಸರಾ ಉತ್ಸವದ ಸಮಾರಂಭಕ್ಕೆ ಆಹ್ವಾನಿಸಿ ಬಹುಮಾನ ನೀಡಲಾಗುವುದು ಎಂದು ಈ ಉಪಸಮಿತಿಯ ರೇಖಾ ಮಹೇಶ್ ಹೇಳಿದ್ದಾರೆ. ಗೊಂಬೆ ಪ್ರದರ್ಶನದ ಸ್ಪರ್ಧೆಯಲ್ಲಿ ಆಕಷರ್ಣೀಯವಾಗಿ…

Read More

ಜಿಎಸ್‍ಟಿ ದರ ಇಳಿಕೆ: ಸಚಿವ ಸೋಮಣ್ಣ ಅಭಿಯಾನ ಗುಲಾಬಿ ಹೂ ಕೊಟ್ಟು ಹೊಸ ತೆರಿಗೆ ಬಗ್ಗೆ ಸಾರ್ವಜನಿಕ ಪ್ರಚಾರ

ತುಮಕೂರು: ಕೇಂದ್ರ ಸರ್ಕಾರದ ಜಿಎಸ್‍ಟಿ ಸುಧಾರಣೆ ನಿರ್ಧಾರವು ಭಾರತದ ಹಿತದೃಷ್ಟಿಯಿಂದ ನಿರಂತರ ಸುಧಾರಣೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಸಕ್ರಿಯ ಬದ್ಧತೆಯನ್ನು ತೋರಿಸುತ್ತದೆ. ಸೋಮವಾರದಿಂದ ದೇಶಾದ್ಯಂತ ಜಾರಿಯಾಗಿರುವ ಹೊಸ ಜಿಎಸ್‍ಟಿ ಪದ್ದತಿಯಿಂದ ಜನಸಾಮಾನ್ಯರಿಗೆ ಬಹಳಷ್ಟು ಸಹಾಯವಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ಸುಧಾರಿತ ಜಿಎಸ್‍ಟಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಸಚಿವ ಸೋಮಣ್ಣ ನಗರದ ವಿವಿಧೆಡೆ ಜಿಎಸ್‍ಟಿ ಸುಧಾರಣೆಗಳ ಪ್ರಚಾರ ಅಭಿಯಾನ ನಡೆಸಿ ಸಾರ್ವಜನಿಕರನ್ನು ಭೇಟಿ ಮಾಡಿ ಗುಲಾಬಿ…

Read More

ರಂಗಗೀತೆ ಹಾಡಿ ರಂಜಿಸಿದ ಸಚಿವ ಡಾ.ಪರಮೇಶ್ವರ್ 11 ದಿನಗಳ ರಂಗ ದಸರಾ ನಾಟಕೋತ್ಸವಕ್ಕೆ ಸಚಿವರಿಂದ ಚಾಲನೆ

ತುಮಕೂರು: ದಸರಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಾಟಾಗಿರುವ 11 ದಿನಗಳ ತುಮಕೂರು ರಂಗ ದಸರಾ ನಾಟಕೋತ್ಸವವನ್ನು ಸೋಮವಾರ ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಕುರುಕ್ಷೇತ್ರದ ಶ್ರೀಕೃಷ್ಣ ಪಾತ್ರದ ರಂಗಗೀತೆ ಹಾಡಿ ರಂಜಿಸಿದರು. ಸಚಿವರ ರಂಗಗೀತೆಗೆ ಮನಸೋತ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಆನಂದಿಸಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ಸಚಿವವ ಡಾ.ಪರಮೇಶ್ವರ್, ಅನೇಕ ಕಲಾವಿದರನ್ನು ನಾಡಿಗೆ ಕೊಡುಗೆ…

Read More

ಮಲೇಶಿಯಾ ವಿವಿ ಜೊತೆ ಸಿದ್ಧಾರ್ಥ ಮ್ಯಾನೇಜ್‌ಮೆಂಟ್ ಸ್ಟಡೀಸ್ ಒಡಂಬಡಿಕೆ

ಶೈಕ್ಷಣಿಕ -ಸಂಶೋಧನೆ ಕ್ಷೇತ್ರದಲ್ಲಿ ಪರಸ್ಪರ ವಿನಿಮಯ: ಮಲೇಶಿಯಾ ವಿವಿ ಜೊತೆ ಸಿದ್ಧಾರ್ಥ ಮ್ಯಾನೇಜ್‌ಮೆಂಟ್ ಸ್ಟಡೀಸ್ ಒಡಂಬಡಿಕೆ ತುಮಕೂರು: ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದ ಉನ್ನತ ಶಿಕ್ಷಣವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (SSIBM) ಮಲೇಶಿಯಾದ ಐಎನ್‌ಟಿಐ  ವಿಶ್ವವಿದ್ಯಾಲಯದೊಂದಿಗೆ ಪರಸ್ಪರ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ. ಮಲೇಶಿಯಾದ ಕೌಲಾಲಂಪುರ್‌ದ ಯುಸಿಎಸ್‌ಐ ವಿಶ್ವವಿದ್ಯಾಲಯದಲ್ಲಿನ ಕ್ಯಾಂಪಸ್ ಹಮ್ಮಿಕೊಳ್ಳಲಾದ ೫ ದಿನಗಳ ಜಾಗತಿಕ ಶೈಕ್ಷಣಿಕ…

Read More

ತುಮಕೂರು ದಸರಾ ಉತ್ಸವ 2025 ತುಮಕೂರು ದಸರಾ ವಿಶೇಷ ಉಚಿತ ಅಂಬಾರಿ ಬಸ್ ಪ್ರಯಾಣ

ತುಮಕೂರು :ಸನ್ಮಾನ್ಯ ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ತುಮಕೂರು ದಸರಾ ಉತ್ಸವ ಸಭೆಯಲ್ಲಿ ತುಮಕೂರು ದಸರಾ ಉತ್ಸವವನ್ನು ಅತ್ಯಂತ ಗೌರವಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ದಿನಾಂಕ: 22.09.2025 ರಿಂದ 02.10.2025 ರವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕೆಳಕಂಡ ಮಾರ್ಗದ ಅಂಬಾರಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸನ್ಮಾನ್ಯ ಡಾ|| ಜಿ. ಪರಮೇಶ್ವರ, ಮಾನ್ಯ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ರವರು…

Read More

ಬಲಿಜರು ತಪ್ಪದೇ 9ನೇ ಕಾಲಂನಲ್ಲಿ ಬಲಿಜ ಎಂದು ನಮೂದಿಸಿ’

ಸಮಾಜ ಬಾಂಧವರಿಗೆ ಜಿಲ್ಲಾ ಬಲಿಜ ಸಂಘದ ಮುಖಂಡರ ಮನವಿ ತುಮಕೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪೂರಕವಾಗಿ ಈ ತಿಂಗಳ 22ರಿಂದ ಆರಂಭವಾಗುವ ಜಾತಿ ಜನಗಣತಿಯಲ್ಲಿ ಜಿಲ್ಲೆಯ ಬಲಿಜ ಸಮಾಜದವರು ತಪ್ಪದೇ ನಿಖರ ಮಾಹಿತಿ ನೀಡಿ 9ನೇ ಕಾಲಂನಲ್ಲಿ ಕೋಡ್ ನಂ. ಎ-0120ರಲ್ಲಿ ಬಲಿಜ ಎಂಬುದಾಗಿ ನಮೂದಿಸಬೇಕು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ ಹಾಗೂ ಖಜಾಂಚಿ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮನವಿ ಮಾಡಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ರಾಜ್ಯ ಬಲಿಜ ಸಂಘದ…

Read More
error: Content is protected !!