ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಯುವ ಉತ್ಸಾಹ ಇರಬೇಕು. ಡಾ. ಎಂ.ಎಸ್ ರವಿಪ್ರಕಾಶ:
ತುಮಕುರು: ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಯುವ ಉತ್ಸಾಹ ಇರಬೇಕು. ಅದರಲ್ಲೂ ತಾಂತ್ರಿಕ ಕಲಿಕೆಯಲ್ಲಿ ವಿದ್ಯಾರ್ಥಿಗಳು ಮುಂದಿರಬೇಕು ಎಂದು ಶ್ರೀ ಸಿದ್ದಾರ್ಥ ತಾಂತ್ರಿಕ ಮಹವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ ಅಭಿಪ್ರಾಯಪಟ್ಟರು. ನಗರದ ಎಸ್ಎಸ್ಐಟಿಯ ಎಲೆಕ್ಟ್ರಿಕಲ್ & ಎಲೆಕ್ರ್ಟಾನಿಕ್ಸ್ ವಿಭಾಗ ಏರ್ಪಡಿಸಿದ್ದ ಆರು ದಿನಗಳ ‘ಪ್ರಾಕ್ಟಿಕಲ್ ಹ್ಯಾಂಡ್ ಆನ್ ಟ್ರೇನಿಂಗ್ ಆನ್ ಎಲೆಕ್ಟ್ರಿಕಲ್ ಸ್ವಿಚ್ ಗೇರ್ ಅಂಡ್ ಇಟ್ಸ್ ಅಪ್ಲಿಕೇಶನ್ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ಕಾರ್ಯಗಾರಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳು ವೃದ್ದಿಯಾಗುತ್ತದೆ. ಈಗ ಕಲಿತ ಕೌಶಲ್ಯಗಳು ಕೆಲಸಕ್ಕೆ…