ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರನ್ನು ವಶಕ್ಕೆ ಪಡೆದ ಮಧುಗಿರಿ ಡಿವೈಎಸ್ಪಿ
ತುಮಕೂರು : ಹಲವಾರು ಬಾರಿ ಜಾಗೃತಿ ಮೂಡಿಸಿದ್ದರೂ ರಾತ್ರಿ ಹಗಲು ನಿರ್ಭೀತಿಯಿಂದ ವ್ಯಾಪಕ ಮರಳು ಮಾರಾಟ ದಂಧೆಗಳು ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಮಧುಗಿರಿ ಡಿವೈಎಸ್ಪಿ ಹಾಗೂ ತಂಡ ಶನಿವಾರ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಅಕ್ರಮ ಸಾಗಾಣಿಕೆಯ ಮರಳು ಟ್ರಾಕ್ಟರ್ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಅರಸೀಕೆರೆ,ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಕೆರೆಕುಂಟೆ ಹಾಗೂ ಇತರೆ ಹಳ್ಳಗಳಿಂದ ಪಕ್ಕದ ಆಂಧ್ರದ ನಗರ ಪ್ರದೇಶಗಳಿಗೆ ಅಕ್ರಮ…