ಪ್ರಮುಖ ಸುದ್ದಿಗಳು
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ರವೀಂದ್ರನಾಥ ಠಾಗೂರ್ ರವರ ಜನ್ಮದಿನಾಚರಣೆ
ತುಮಕೂರು : ಇಂದು ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ಸ್ವಾತಂತ್ರ್ಯ ಭಾರತದ ರಾಷ್ಟ್ರಗೀತೆಯ ಜನಕ ರವೀಂದ್ರನಾಥ ಠಾಗೂರ್ ರವರ ಜನ್ಮದಿನಾಚರಣೆ ಹಾಗೂ ಸಮಾನತೆಯ ಬುನಾದಿ ಹಾಕಿಕೊಟ್ಟಂತಹ ಶಾಹು ಮಹರಾಜ್ ರವರ ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ಆಚರಿಸಲಾಯಿತು. ಇಬ್ಬರು ಮಹಾನಾಯಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಜಿಲ್ಲಾಧ್ಯಕ್ಷರಾದ ಎನ್.ಕೆ. ನಿಧಿಕುಮಾರ್ ಮಾತನಾಡುತ್ತಾ ನಮ್ಮ ಭಾರತ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ನದಿಗಳು,…
ಅಕ್ಷರ ಸೂರ್ಯ
ಕತ್ತಲೆ ಆವರಿಸಿದ ಕಾಲದ ಗರ್ಭದಿ ಜ್ಞಾನದ ದೀವಿಗೆಯ ಹಚ್ಚಿದೆ ಅವಮಾನದ ಸುಳಿಯಲ್ಲಿ ನೊಂದ ಜೀವಗಳಿಗೆ ಅಭಯದ ಹಸ್ತವ ಚಾಚಿದೆ ನೀ.. ಅಕ್ಷರವನ್ನೇ ಅಸ್ತ್ರವನ್ನಾಗಿಸಿ ಗುಲಾಮಗಿರಿಯ ಸಂಕೋಲೆ ಮುರಿದೆ ಮಹಾಡ್ ಕೆರೆಯ ನೀರ ಹನಿಹನಿಯಲ್ಲೂ ಸ್ವಾಭಿಮಾನದ ಕಿಚ್ಚನು ಹಚ್ಚಿದೆ ನೀ.. ಸಂವಿಧಾನದ ಪುಟಪುಟಗಳಲಿ ಸಮಾನತೆ ಬರೆದು ಭಾರತ ಭಾಗ್ಯವ ಬದಲಿಸಿದೆ ಜಾತಿ ರಹಿತ ಸಮಾಜದ ಕನಸನು ಕಂಡು ಭ್ರಾತೃತ್ವದ ಬೀಜವ ಬಿತ್ತಿದೆ ನೀ.. ಕಲಿಯಿರಿ, ಸಂಘಟಿತರಾಗಿ ಹೋರಾಡಿ ಎಂದು ಸರ್ವ ಶೋಷಿತರ ದನಿಯಾಗಿ ಗುಡುಗಿದೆ ಬೌದ್ಧ…
ಕಲಾವಿದನ ಸಾಧನೆಗೆ ಕಲಾ ಪ್ರೋತ್ಸಾಹಕರ ಸಹಕಾರ ಅತ್ಯಗತ್ಯ :ವಿಶ್ವೇಶ್ವರಯ್ಯ
ರಂಗಭೂಮಿ ಕ್ಷೇತ್ರದಲ್ಲಿ ಒಬ್ಬ ಕಲಾವಿದ ಸಾಧನೆ ಮಾಡಬೇಕಾದರೆ ಕಲಾ ಪ್ರೋತ್ಸಾಹಕರ ಸಹಕಾರ ಪ್ರಮುಖವಾದದ್ದು ಎಂದು ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ವಿಶ್ವೇಶ್ವರಯ್ಯ ನವರು ತಿಳಿಸಿದರು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಗಡ್ಡೋಬನಹಳ್ಳಿ ಗ್ರಾಮದಲ್ಲಿ ದಿನಾಂಕ 16/4/2026 ರಂದು ಶ್ರೀ ಚಿರಂಜೀವಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಮಾರಮ್ಮ ದೇವಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಲಾಗಿದ್ದ ಕುರುಕ್ಷೇತ್ರ ಅಥವಾ ಶ್ರೀ…
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮದಿನ ಆಚರಣೆ
ತುಮಕೂರು : ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸಂಘ, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ತುಮಕೂರು ಗ್ರಾಮಾಂತರದ ನರಸಾಪುರ ಗ್ರಾಮದ ಊರಿನ ಮುಖಂಡರುಗಳು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು ಸೇರಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮದಿನವನ್ನು ಬಾಬಾ ಸಾಹೇಬರ ಭಾವಚಿತ್ರದ ಮುಂಭಾಗ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ಸಮಾನತೆ ದಿನವನ್ನು ಅರ್ಥಪೂರ್ಣವಾಗಿ…
ಶೇಕಡಾ 100% ಫಲಿತಾಂಶ ಪಡೆದು ಆಕಾಶ್ ಕಾಲೇಜಿಗೆ ಕಿರ್ತಿ ತಂದ ವಿದ್ಯಾರ್ಥಿಗಳು
ವಿಜ್ಞಾನ ವಿಭಾಗದಲ್ಲಿ ಶತಪ್ರತಿಶತ ಸಾಧನೆ – ವಿದ್ಯಾರ್ಥಿಗಳ ಕೀರ್ತಿ ತುಮಕೂರು ನಗರದ ಪ್ರತಿಷ್ಠಿತ ಆಕಾಶ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2025-26ನೇ ಸಾಲಿನ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100% ರಷ್ಟು ಫಲಿತಂಶ ಪಡೆದು ಕಾಲೇಜಿಗೆ ಕೀರ್ತಿತಂದಿರುತ್ತಾರೆ. ಈ ಸಂದರ್ಭದಲ್ಲಿ ಆಕಾಶ್ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ವಿನಯ್ ಎಲ್. ಎ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕು ॥ ಚೇತನ ಕೆ ಎಂ 582 (97%) ಅಂಕಗಳನ್ನು ಪಡೆದು ಕಾಲೇಜಿನ ಟಾಪ್ಟರ್…
ಜನಗಣತಿ-2027 ಸ್ವಯಂ-ಗಣತಿ ಪ್ರಕ್ರಿಯೆಗೆ ಗುಬ್ಬಿ ತಾಲೂಕು ಆಡಳಿತ ಸಕಲ ಸಿದ್ದತೆ
ಗುಬ್ಬಿ ಸುದ್ದಿ ಜನಗಣತಿ-2027 ಕಾರ್ಯವನ್ನು ತಾಲ್ಲೂಕಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು , ಏಪ್ರಿಲ್ 01 ರಿಂದ ಸ್ವಯಂ-ಗಣತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಹಶೀಲ್ದಾರ್ ಹಾಗೂ ರೂರಲ್ ಚಾರ್ಜ್ ಆಫೀಸರ್ ಆರತಿ ಬಿ ತಿಳಿಸಿದರು. ತಾಲೂಕು ಕಚೇರಿಯ ಕೋರ್ಟ್ ಹಾಲ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಅಧಿಸೂಚನೆ ಹೊರಡಿಸಿದ್ದು, ಅದರನ್ವಯ ಸ್ವಯಂ ಗಣತಿ ನಂತರ ಏ.16 ರಿಂದ ಮೇ.15 ರವರೆಗೆ ಮನೆ ಗಣತಿ. 2027ರಲ್ಲಿ ಎರಡನೇ…
ಹನುಮ ಜಯಂತಿಯ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿಯವರ ಭವ್ಯಮೂರ್ತಿಗೆ ಪಂಚಾಮೃತ ಅಭಿಷೇಕ
ಗುಬ್ಬಿ ಎನ್ ರಾಂಪುರ ::ಹನುಮಜಯಂತಿ ಗುಬ್ಬಿ ತಾ/ ದಿ- 02.೦4.2026 ಶನಿವಾರ ಹನುಮ ಜಯಂತಿಯ ಪ್ರಯುಕ್ತ ನಿಟ್ಟೂರು ಹೋಬಳಿ ಎನ್ ರಾಂಪುರ ಗ್ರಾಮದಲ್ಲಿ ನಾಡಿನ.ಒಳಿತಿಗಾಗಿ ಅಂದು ಬ್ರಾಹ್ಮಿ ಮುಹೂರ್ತ ದಲ್ಲಿ ಹಸಿರು ತೋಪಿನ ನಡುವೆ ವಿರಾಜಮಾನರಾದ ಪುರಾತನ ಪ್ರಸಿದ್ಧ ಶ್ರೀ ವೀರಾಂಜನೇಯ ಸ್ವಾಮಿಯವರ ಭವ್ಯಮೂರ್ತಿಗೆ ಪಂಚಾಮೃತ ಅಭಿಷೇಕ ಮತ್ತು ಲೋಕದ ಒಳಿತಿಗಾಗಿ ಹೋಮ ಹವನ ಕಾರ್ಯಗಳು ಸಾಗುತ್ತವೆ. ಅದೇ ದಿನ ಗ್ರಾಮದ ಕ್ಷೇತ್ರ ಪಾಲಕ ಬಸವೇಶ್ವರ ಸ್ವಾಮಿ,, ತಿಮ್ಮಪ್ಪ,, ಆಂಜನೇಯ ಪರಿವಾರ ದೇವರುಗಳ ಆಗಮನ ವಿಶೇಷ…
ಮಾರ್ಚ್ 28 ರಂದು ವಿಶ್ವ ಮಹಿಳಾ ದಿನಾಚರಣೆ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರ.
ತುಮುಲ್ ವತಿಯಿಂದ ಮಾರ್ಚ್ 28 ರಂದು ಗುಬ್ಬಿ ನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರ.ಆಯೋಜನೆ. ಭಾರತಿ ಶ್ರೀನಿವಾಸ್. ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾರ್ಚ್ 28 ರಂದು ಗುಬ್ಬಿ ನಗರದ ನಂದಿನಿ ಕ್ಷೀರ ಭವನದ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದು ಇದರ ಸದುಪಯೋಗವನ್ನು ಹಾಲು ಉತ್ಪಾದಕ ಸಂಘಗಳ ಸದಸ್ಯರುಗಳು. ತಾಲೂಕಿನ…
ಜಿ.ಪಂ ಸಿಇಒಗೆ ಪಿಯು ಡಿಡಿ ಕಚೇರಿ ಆಡಳಿತ ನಿಯಂತ್ರಣ
ಜಿ.ಪಂ ಸಿಇಒಗೆ ಪಿಯು ಡಿಡಿ ಕಚೇರಿ ಆಡಳಿತ ನಿಯಂತ್ರಣ ಪ್ರಸ್ತಾವನೆ ಹಿಂಪಡೆಯಲು ಸರ್ಕಾರಕ್ಕೆ ಉಪನ್ಯಾಸಕರ ಒತ್ತಾಯ ತುಮಕೂರು: ಸರ್ಕಾರದ ಪ್ರಸ್ತಾಪಿಸರುವ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಪ್ರಸ್ತಾವನೆ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಉಪನ್ಯಾಸಕರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ…
ಗುಬ್ಬಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೋಟ್ಯಂತರ ರೂ. ವೆಚ್ವಮಾಡಿದ ಸಿನಾಪ್ಸಿಸ್ ಸಂಸ್ಥೆಗೆ ಶ್ಲಾಘನೆ
ಸ್ಮಾರ್ಟ್ ಸೌಲಭ್ಯದ ಸದ್ಬಳಕೆಗೆ ತಹಸೀಲ್ದಾರ್ ಆರತಿ ವಿದ್ಯಾರ್ಥಿಗಳಿಗೆ ಕರೆ ತುಮಕೂರು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಸ್ಮಾರ್ಟ್ ಆಗುವಂತೆ ಗುಬ್ಬಿ ತಹಸೀಲ್ದಾರ್ ಆರತಿ ಬಿ. ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕಾ ಮೂಲದ ಬೆಂಗಳೂರಿನ ಸಿನಾಪ್ಸಿಸ್ ಸಂಸ್ಥೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಿ ಕೊಟ್ಟಿರುವ ಕ್ರಮವನ್ನು ಶ್ಲಾಘಿಸಿದ ಅವರು, ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು…