ಪ್ರಮುಖ ಸುದ್ದಿಗಳು
ಕೆ.ಎನ್.ಆರ್.ಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ
ಸಿಎಂ ಬಳಿಗೆ ಹಿಂದುಳಿದ ವರ್ಗಗಳ ಮುಖಂಡರ ನಿಯೋಗ ತುಮಕೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆ.ಎನ್.ರಾಜಣ್ಣನವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು, ಅವರ ಆಸಕ್ತಿಯ ಹಾಗೂ ಪರಿಣತಿ ಹೊಂದಿರುವ ಸಹಕಾರ ಖಾತೆಯನ್ನೇ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜಗಳ ಮುಖಂಡರು ಇನ್ನೆರಡು ದಿನಗಳನ್ನು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಿದ್ದಾರೆ. ತುಮಕೂರು ಜಿಲ್ಲೆಯ ಪ್ರಭಾವಿ ನಾಯಕ, ಹಿಂದುಳಿದ ವರ್ಗಗಳ ಆಶಾಕಿರಣವಾಗಿರುವ ಕೆ.ಎನ್.ರಾಜಣ್ಣನವರು ಯಾವುದೇ ತಪ್ಪು, ಭ್ರಷ್ಟಾಚಾರ ಮಾಡದಿದ್ದರೂ ಕ್ಷುಲ್ಲಕ ಕಾರಣವೊಡ್ಡಿ ಅವರನ್ನು ಸಚಿವ ಸ್ಥಾನದಿಂದ…
ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ನಲ್ಲಿ ಪ್ರಥಮ MBA ಬ್ಯಾಚ್ ಉದ್ಘಾಟನೆ
ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ನಲ್ಲಿ ಪ್ರಥಮ MBA ಬ್ಯಾಚ್ ಉದ್ಘಾಟನೆ ನಗರದ ವಿದ್ಯಾವಾಹಿನಿ ಸಮೂಹ ಸಂಸ್ಥೆಯ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ತನ್ನ ಮೊದಲ MBA ಬ್ಯಾಚ್ (2025-26) ಅನ್ನು ನವೆಂಬರ್ 17, 2025 ರಂದು ವೈಸಿರಿ ಕ್ಯಾಂಪಸ್ನಲ್ಲಿ ಉದ್ಘಾಟಿಸಿತು. ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಕೆ. ಬಿ. ಜಯಣ್ಣರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೈಗಾರಿಕಾ ಕ್ಷೇತ್ರದೊಂದಿಗೆ ದೃಢವಾದ ನಂಟಿನ ಅಗತ್ಯತೆಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳ…
ಜೀವನದ ಅನನ್ಯ ಹಾದಿಯಲ್ಲಿ ಅನೇಕರ ಹೃದಯ ಗೆದ್ದಂತಹ ವ್ಯಕ್ತಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನವರು
ತುಮಕೂರು : ಮಕ್ಕಳ ದಿನಾಚರಣೆಯಂದು ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕರವರು ಇಹಲೋಕ ತ್ಯಜಿಸಿದ್ದರ ಪ್ರಯುಕ್ತ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಅಂಬೇಡ್ಕರ್ರವರ ಪುತ್ಥಳಿಯ ಮುಂಭಾಗದಲ್ಲಿ ಮೇಣದಬತ್ತಿಯನ್ನು ಹಚ್ಚುವುದರ ಮೂಲಕ ಸಾಲುಮರದ ತಿಮ್ಮಕ್ಕರವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ…
ಮಕ್ಕಳ ಶೈಕ್ಷಣಿಕ ತಳಹದಿ ಗುಣಾತ್ಮಕವಾಗಿರಲಿ: ಸುರೇಶ್ಗೌಡ ಆಶಯ
ನೆಲಹಾಳ್ನಲ್ಲಿ ಕೋಟಿ ರೂ. ವೆಚ್ಚದ ಸುಸಜ್ಜಿತ ಶಾಲೆ ಲೋಕಾರ್ಪಣೆ ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ನೆಲಹಾಳ್ ಗ್ರಾಮದಲ್ಲಿ ಜಪಾನ್ ದೇಶದ ಟಿಮೆಕ್ ಕಂಪನಿಯ ಸಿಎಸ್ಆರ್ ನಿಧಿಯಡಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳನ್ನು ಶುಕ್ರವಾರ ಶಾಸಕ ಬಿ.ಸುರೇಶ್ಗೌಡರು ಹಾಗೂ ಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಲೋಕಾರ್ಪಣೆ ಮಾಡಿದರು. ಇದರ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸುರೇಶ್ಗೌಡರು, ಶಿಕ್ಷಣದ ತಳಹದಿ ಗುಣಮಟ್ಟದಿಂದ…
ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿ ನಗರಕ್ಕೆ ಆಗಮನ
15-16ರಂದು ಸ್ವಾಮಿಯ ವೈಭವದ ಶೋಭಾಯಾತ್ರೆ, ಕಲ್ಯಾಣೋತ್ಸವ ತುಮಕೂರು: ಲೋಕಲ್ಯಾಣಾರ್ಥ ಆರ್ಯವೈಶ್ಯ ಶ್ರೀರಾಮ ಸೇವಾ ಸಮಿತಿ ಈ ತಿಂಗಳ 15 ಮತ್ತು 16ರಂದು ನಗರದಲ್ಲಿ ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿಯ ಶೋಭಾಯಾತ್ರೆ ಹಾಗೂ ಕಲ್ಯಾಣೋತ್ಸವವನ್ನು ವೈಭವದಿಂದ ಹಮ್ಮಿಕೊಂಡಿದೆ. ಗುರುವಾರ ನಗರದ ಚಿಕ್ಕಪೇಟೆಯ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರ್ಯವೈಶ್ಯ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಅಮರ್ನಾಥ್, ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿ ಶೋಭಾಯಾತ್ರೆ ಮತ್ತು ಕಲ್ಯಾಣೋತ್ಸವದ ಅಂಗವಾಗಿ ಈ ತಿಂಗಳ 15 ಮತ್ತು 16ರಂದು…
ಭಾರತಿ ದರ್ಶ್ ಫೌಂಡೇಶನ್ ನಿಂದ ಉಚಿತ ದಂತ ಚಿಕಿತ್ಸಾ ಶಿಬಿರ
ಬೆಂಗಳೂರು ; ರಾಜಗೋಪಾಲನಗರದ ಬಸಪ್ಪನಕಟ್ಟೆಯಲ್ಲಿ ಭಾರತಿದರ್ಶ್ ಫೌಂಡೇಶನ್ (ರಿ) ಆಯೋಜಿಸಿದ್ದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಎಲ್.ಬಿ.ಎಸ್ ಅಟೋಮೆಷನ್ ಸಿಸ್ಟಮ್ ನ ಮಾಲೀಕ ಬಸವರಾಜ್ ಎನ್. ಕೆ ಮತ್ತು ಶ್ರೀಮತಿ ಲೀಲಾವತಿ. ಪಿ.ಎಮ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷಕರಾದ ಭಾ ಮ ಹರೀಶ್ ಉದ್ಘಾಟಿಸಿದರು ಭಾ ಮ ಹರೀಶ್ ಮಾತನಾಡಿ ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಚಿಕಿತ್ಸೆ ಮಾಡಿಸುವ ವೆಚ್ಚ ದುಬಾರಿಯಾಗಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಭಾರತಿದರ್ಶ್ ಫೌಂಡೇಶನ್ (ರಿ) ಆಯೋಜಿಸುವ ವೈದ್ಯಕೀಯ ಚಿಕಿತ್ಸೆ…
ವಿಶ್ವ ರೇಬಿಸ್ ಲಸಿಕಾ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಮನವಿ
ತುಮಕೂರು : ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿಗಳಿಂದ ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿಯಾಗಿದ್ದು, ಈ ಲಸಿಕಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಹೆಚ್.ಎಂ.ಶಿವಪ್ರಸಾದ ಅವರು ಮನವಿ ಮಾಡಿದರು. ಅವರು ಸೆಪ್ಪಂಬರ್ 28ರಂದು ಜಿಲ್ಲಾ ಪಂಚಾಯತಿ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಶು ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರೇಬಿಸ್ ದಿನಾಚರಣೆಯನ್ನು ನಾಯಿಗಳಿಗೆ ಲಸಿಕೆ ನೀಡುವ…
ವಿವಿಧ ಸಮಾಜಗಳ ಮುಖಂಡರಿಗೆ ದಸರಾ ಗೌರವಾರ್ಪಣೆ ತುಮಕೂರು ದಸರಾ ಸಮಿತಿಯಿಂದ ಸಮಾಜ ಸೇವಾ ಸಾಧಕರಿಗೆ ಸನ್ಮಾನ
ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದ ಶನಿವಾರದ ಕಾರ್ಯಕ್ರಮದಲ್ಲಿ ನಗರದ ವಿವಿಧ ಸಮಾಜಗಳ ಮುಖಂಡರಿಗೆ ‘ಸಮಾಜ ಸಾಮರಸ್ಯ ಸುಧಾರಕರು’ ಎಂದು ಪ್ರಶಂಸಿಸಿ ಗೌರವಿಸಲಾಯಿತು. ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರ ಆವರಣದಲ್ಲಿ ನಡೆದಿರುವ ದಸರಾ ಉತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಸಮಿತಿಯ ಮುಖಂಡರು ನಾನಾ ಸಮಾಜಗಳ ಮುಖಂಡರನ್ನು ಸನ್ಮಾನಿಸಿ ಅಭಿನಂದಿಸಿದರು. ವಿವಿಧ ಸಮಾಜಗಳ ಮುಖಂಡರುಗಳಾದ ಟಿ.ಕೆ.ನರಸಿಂಹಮೂರ್ತಿ, ಜಿ.ಎಂ.ಸಣ್ಣಮುದ್ದಯ್ಯ, ತುಂಗೋಟಿ ನರಸಿಂಹಯ್ಯ, ಪಿ.ಎನ್.ರಾಮಯ್ಯ, ಎಸ್.ಪುಟ್ಟೀರಪ್ಪ, ಮಹದೇವಯ್ಯ, ಪ್ರೊ.ಕೆ.ಚಂದ್ರಣ್ಣ, ಸೀತಾರಾಮ್, ಹೆಚ್.ಪಿ.ವಿಶ್ವಜ್ಞಾನಚಾರ್ಯ, ತಾಂಡವಮೂರ್ತಿ, ಸಕ್ಕರೆ ಕುಮಾರಸ್ವಾಮಿ, ಟಿ.ಹೆಚ್.ಶಿವಾನಂದ್,…
ಸಮೀಕ್ಷೆಯಲ್ಲಿ ‘ವೀರಶೈವ ಲಿಂಗಾಯಿತ’ ಎಂದು ಬರೆಸಿ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ನಿಂದ ಮನವಿ
ತುಮಕೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ವೀರಶೈವ ಲಿಂಗಾಯಿತ ಬಂಧುಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ ಎಂದು ನಮೂದಿಸಬೇಕು ಎಂದು ಜಗದುರು ಪಂಚಾಚಾರ್ಯ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಟಿ.ಆರ್.ಸದಾಶಿವಯ್ಯ ಮನವಿ ಮಾಡಿದ್ದಾರೆ. ಸಮೀಕ್ಷಾ ಕಾರ್ಯದಲ್ಲಿ ಗಣತಿದಾರರ ಪ್ರಶ್ನೆಗಳಿಗೆ ನಿಖರ ಮಾಹಿತಿಯನ್ನು ನೀಡುವುದು ಪ್ರಮುಖ ಜವಾಬ್ದಾರಿಯಾಗಿದೆ. ನಮ್ಮ ಸಮಾಜದ ಎಲ್ಲರೂ ಸಹ ನಾಡಿನ ಹಿರಿಯರು, ಗುರುಗಳು ನೀಡಿರುವ ಸಂದೇಶದಂತೆ ಧರ್ಮ- ಹಿಂದೂ, ಜಾತಿ-ವೀರಶೈವ ಲಿಂಗಾಯತ(ಅoಜe:ಂ-1524)…
ರೋಮಾಂಚಕಾರಿ ಮಲ್ಲಕಂಬ ಪ್ರದರ್ಶನ ತುಮಕೂರು ದಸರಾ ಸಮಿತಿ ಉತ್ಸವದ ಆಕರ್ಷಣೆ
ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದಲ್ಲಿ ಈ ನೆಲದ ಕ್ರೀಡೆಯಾದ ಮಲ್ಲಕಂಬ ಪ್ರದರ್ಶನ ಆಕರ್ಷಣೀಯವಾಗಿತ್ತು. ನಗರದ ಶ್ರೀರಾಮ ಮಂದಿರದ ಆವರಣದಲ್ಲಿ ನಡೆದ ಮಲ್ಲಕಂಬ ಕ್ರೀಡೆ ಪ್ರದರ್ಶನದಲ್ಲಿ ಬೆಂಗಳೂರಿನ ಜಿಗಣಿ ವಿವೇಕಾನಂದ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಲ್ಲಕಂಬ ಮೇಲೆ ವಿವಿಧ ಕಸರತ್ತಿನ ರೋಮಾಂಚಕಾರಿ ಪ್ರದರ್ಶನ ನೀಡಿದರು. ಮಲ್ಲಕಂಬ ಈ ನೆಲದಲ್ಲಿ ಹುಟ್ಟಿದ ಅಪ್ಪಟ ದೇಶೀಯ ಕ್ರೀಡೆ. ಹೆಸರೇ ಸೂಚಿಸುವಂತೆ ಗರಡಿಯಲ್ಲಿ ಕಸರತ್ತು ಮಾಡುವ ಕುಸ್ತಿಪಟುಗಳು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಮಲ್ಲಕಂಬ ಪ್ರತ್ಯೇಕ…