ಕಾಯಕಯೋಗಿ ಬಸವಣ್ಣನವರ ಕಾಯಕಶ್ರದ್ಧೆ ಸರ್ವಕಾಲಕ್ಕೂ ಅನುಕರಣೀಯ :: ಡಾ.ಶಶಿಧರ್*
ತುರುವೇಕೆರೆ: ಕಾಯಕವೇ ಕೈಲಾಸ ಎಂದು ಕಾಯಕದಲ್ಲಿ ಭಗವಂತನ ಕಂಡ ಕಾಯಕಯೋಗಿ ಬಸವಣ್ಣನವರ ಕಾಯಕಶ್ರದ್ಧೆ ಸರ್ವಕಾಲಕ್ಕೂ ಅನುಕರಣೀಯವಾದು ಎಂದು ವೈದ್ಯ ಡಾ. ಎಂ.ಶಶಿಧರ್ ತಿಳಿಸಿದರು. ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿನ ಬೆಂಗಳೂರು ಕ್ಲಿನಿಕ್ ನಲ್ಲಿ ಆಯೋಜಿಸಿದ್ದ 891ನೇ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರು ಭಾರತದ 12ನೇ ಶತಮಾನದ ಕನ್ನಡದ ಮಹಾ ತತ್ವಜ್ಞಾನಿಗಳು. ವಚನಗಳ ಮೂಲಕ ಜಾತಿ, ಮತ, ಪಂಥ, ಧರ್ಮಗಳ ನಡುವಿನ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಸಾಮಾಜಿಕ ಸುಧಾರಕರು….