ತುಮಕೂರು : ರಾಜ್ಯದ ಸರ್ವ ಜನಾಂಗದ ಅಭಿವೃದ್ಧಿಗೆ ಸಹಕಾರ ನೀಡುವ ಮೂಲಕ ಸಹಕಾರ ರತ್ನ ಎಂಬ ಬಿರುದನ್ನು ಪಡೆದಿರುವ ಕೆ, ಎನ್, ರಾಜಣ್ಣನವರ 75 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿರುವುದು ನಾಡಿನ ಜನತೆಗೆ ಸಂತಸದ ವಿಷಯ ಎಂದು ಜಿಲ್ಲಾ ಜಾಗೃತಿಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯ ರಾಜಣ್ಣ (ಕೋರಾ) ರವರು ಅಭಿನಂದನೆ ತಿಳಿಸಿದರು.
ತುಮಕೂರು ನಗರದಲ್ಲಿ ಮಾತನಾಡಿದ ಅವರು ಕೆ, ಎನ್ ರಾಜಣ್ಣನವರು ದಿನ ದಲಿತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ನಾಯಕರಾಗಿದ್ದು ತುಮಕೂರು ಜಿಲ್ಲೆಯ ಬಡವರಿಗೆ ಕೂಲಿ ಕಾರ್ಮಿಕರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ರಾಜಣ್ಣನವರು ಜಿಲ್ಲೆಯಲ್ಲಿ ಯಾವುದೇ ಸಮುದಾಯದ ವ್ಯಕ್ತಿಗಳು ಅವರನ್ನು ಬೇಟಿ ಮಾಡಿ ಸಹಾಯವನ್ನು ಕೋರಿದಾಗ ಅವರಿಗೆ ಪ್ರೀತಿ ತೋರಿಸಿ ಸಹಾಯ ಮಾಡಿದ ಸರ್ವಜನಾಂಗದ ಸರದಾರ ಎಂದು ಹೇಳಲು ನಮಗೆ ಹೆಮ್ಮೆ ಆಗುತ್ತದೆ ಅಂತಹ ಮೇರು ಪರ್ವತವಾದರಿಗೆ ಅಮೃತ ಮಹೋತ್ಸವ ಮಾಡುತ್ತಿರುವುದು ಜಿಲ್ಲೆಯ ಜನತೆಗೆ ಸಂತಸದ ದಿನವಾಗಿದೆ ಎಂದು ತಿಳಿಸಿದರು.
ಇಂದು ನೆಡೆಯುವ ಕೆ, ಎನ್, ಆರ್ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ಸಮುದಾಯದ ಬಂಧುಗಳು ಜಾತ್ಯಾತೀತವಾಗಿ ಭಾಗವಹಿಸುವ ಮೂಲಕ ಸಹಕಾರ ರತ್ನ ಕೆ,ಎನ್, ರಾಜಣ್ಣನವರಿಗೆ ಅಭಿನಂದನೆ ಸಲ್ಲಿಸುವಂತೆ ಮನವಿ ಮಾಡಿದರು .