ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಜಿಲ್ಲೆಯ ಮೂರು ಶಾಸಕರ ಧಯೆ.ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜುಲೇಖಾಬಿ ಯೂಸುಫ್.
ಅಲ್ಪಸಂಖ್ಯಾತ ಸಮುದಾಯವರು ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಧಿ ಅಲಂಕರಿಸಲು ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ.ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್. ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜುರವರು ಎಂದು ಕಲ್ಲೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜುಲೇಖಾಬಿ ಯೂಸುಫ್ ಸಂತಸ ವ್ಯಕ್ತಪಡಿಸಿದರು.
ಕಲ್ಲೂರು ಗ್ರಾಮ ಪಂಚಾಯಿತಿ ಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಇಂದು ಅವಿರೋಧವಾಗಿ ಆಯ್ಕೆ ಯಾಗಿ ನಂತರ ಮಾತನಾಡಿದರು.
ಅಧ್ಯಕ್ಷ ಸ್ಥಾನ ನನಗೆ ದೊರೆತಿದ್ದು ಬಹಳ ಸಂತಸದ ಸಂಗತಿಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಸಹಕಾರ ದಿಂದ ನಾನು ಜನತೆಯ ಸೇವೆ ಮಾಡಲು ಅವಕಾಶ ದೊರೆತಿದ್ದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು.ಸ್ವಚ್ಛತೆ.ಇನ್ನೀತರೆ ಸಮಾಜಿಕೆ ಸೇವೆ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀ ಗುರುಮೂರ್ತಿ. ಉಪಾಧ್ಯಕ್ಷರಾದ ಸುಮಿತ್ರಶಿವಯ್ಯ.ಸದಸ್ಯರಾದ ಶಿವನಂದಯ್ಯ.ನಾಗರಾಜ್.ಹಜರತ್ ಆಲಿ.ಮಾಯಣ್ಣಗೌಡ.ಸಿದ್ದರಾಜು.ಜೇಮ್ ಶದ್ ಬೀ. ಮಂಜುಳ. ಬಿ.ಹೆಚ್.ಸುರೇಶ್.ಕೆ.ಪಿ.ರಾಜೇಗೌಡ.ಮೋಹನ್(ಗುಡಿಗೌಡ).ಬಸವರಾಜು.ಹೇಮಂತ್.ಶಾಂತರಾಜು.ಶಿವು ನಾರನಹಳ್ಳಿ.ಚಿಕ್ಕಣ್ಣ ಇತರ ಮುಖಂಡರು ಹಾಜರಿದ್ದರು.