ಪ್ರಮುಖ ಸುದ್ದಿಗಳು
ಹೊಸ ಉದ್ದಿಮೆಗಳ ಬಗ್ಗೆ ಪ್ರಾಧ್ಯಾಪಕರು ಅಧ್ಯಯನ ನಡೆಸಿದರೆ, ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಬಹುದು : ಮುರುಳೀಧರ್ ಹಾಲಪ್ಪ
ತುಮಕೂರು: ಇಂದಿನ ಸಂಶೋಧನಾತ್ಮಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೃತ್ತಿಪರ ಕೋಸ್ರ್ಗಳು ಸೇರಿದಂತೆ ವಿವಿಧ ವಲಯಗಳಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ತೇರ್ಗಡೆಯಾದರೂ ನಿರುದ್ಯೋಗದ ಸಮಸ್ಯೆ ಸಾಮಾನ್ಯವಾಗಿದೆ ಈ ನಿಟ್ಟಿನಲ್ಲಿ ಕಲಿಯುವ ಹಂತದಲ್ಲಿಯೇ ವೃತ್ತಿಪರವಾಗಿ ಹೊಸ ಹೊಸ ಉದ್ದಿಮೆಗಳನ್ನ ಸ್ಥಾಪಿಸಿ ಅನೇಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿಯೇ ಪ್ರಾಧ್ಯಾಪಕರುಗಳು ಹೊಸ ಉದ್ದಿಮೆಗಳ ಬಗ್ಗೆ ಅಧ್ಯಯನ ನಡೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ತೋರಿದರೆ ನವ ಉದ್ಯೋಗದ ಉದ್ಯಮ ಸ್ಥಾಪನೆಯಾದಂತಾಗುತ್ತದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ್ ಹಾಲಪ್ಪ ಅವರು ತಿಳಿಸಿದರು. ತುಮಕೂರು…
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರನ್ನು ವಶಕ್ಕೆ ಪಡೆದ ಮಧುಗಿರಿ ಡಿವೈಎಸ್ಪಿ
ತುಮಕೂರು : ಹಲವಾರು ಬಾರಿ ಜಾಗೃತಿ ಮೂಡಿಸಿದ್ದರೂ ರಾತ್ರಿ ಹಗಲು ನಿರ್ಭೀತಿಯಿಂದ ವ್ಯಾಪಕ ಮರಳು ಮಾರಾಟ ದಂಧೆಗಳು ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಮಧುಗಿರಿ ಡಿವೈಎಸ್ಪಿ ಹಾಗೂ ತಂಡ ಶನಿವಾರ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಅಕ್ರಮ ಸಾಗಾಣಿಕೆಯ ಮರಳು ಟ್ರಾಕ್ಟರ್ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಅರಸೀಕೆರೆ,ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಕೆರೆಕುಂಟೆ ಹಾಗೂ ಇತರೆ ಹಳ್ಳಗಳಿಂದ ಪಕ್ಕದ ಆಂಧ್ರದ ನಗರ ಪ್ರದೇಶಗಳಿಗೆ ಅಕ್ರಮ…
ಜೂ.17ಕ್ಕೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ಕುಮಾರಸ್ವಾಮಿ ಅಗಮನ
ತುಮಕೂರು :ಕರ್ನಾಟಕ ಪ್ರದೇಶ್ ಜಾತ್ಯಾತೀತ ಜನತಾ ದಳ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಇತರೆ ರಾಜ್ಯ ಮಟ್ಟದ ಗಣ್ಯರು ಇದೇ ಜೂ.17ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪಾವಗಡಕ್ಕೆ ಅಗಮಿಸಲಿದ್ದು ಪಕ್ಷದ ವತಿಯಿಂದ ಪಟ್ಟಣದ ಶ್ರೀ ಅಂಜನೇಯಸ್ವಾಮಿ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಪಕ್ಷ ಸಂಘಟನೆ ರಾಜ್ಯ ಪ್ರವಾಸ ಹಾಗೂ ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿರುವುದಾಗಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಎನ್.ಎ.ಈರಣ್ಣ ತಿಳಿಸಿದ್ದಾರೆ. ಅವರು ತಾಲೂಕು ಜೆಡಿಎಸ್ ವತಿಯಿಂದ ಭಾನುವಾರ ಸಂಜೆ…
ಆಗಸ್ಟ್ 1 ರೊಳಗೆ ಆಟೋ ರಿಕ್ಷಾಗಳಿಗೆ ಸಮವಸ್ತ್ರ ಸೇರಿದಂತೆ ದಾಖಲಾತಿಗಳು ಕಡ್ಡಾಯ ಸಿ, ಪಿ, ಐ,ಸುರೇಶ್ ಖಡಕ್ ಎಚ್ಚರಿಕೆ
ತುಮಕೂರು : ಆಗಸ್ಟ್ 1 ರೊಳಗೆ ಆಟೋ ರಿಕ್ಷಾಗಳಿಗೆ ಸಂಬಂದಿಸಿದ ಚಾಲನ ಪರವಾನಗಿ, ಎಫ್ ಸಿ,ವಿಮಾ, ಪರ್ಮಿಟ್, ಸಮವಸ್ತ್ರ ಇನ್ನಿತರೆ ದಾಖಲಾತಿಗಳು ಕಡ್ಡಾಯವಾಗಿ ಆಟೋ ಚಾಲಕರು ಹೊಂದಿರಬೇಕು ಇಲ್ಲವಾದಲ್ಲಿ ದಂಡದ ಬದಲು ಕೇಸು ದಾಖಲಿಸಿ ಆಟೋವನ್ನು ಸೀಜ್ ಮಾಡಲಾಗುವುದೆಂದು ಆಟೋ ಚಾಲಕರಿಗೆ ಪಾವಗಡ ಪೊಲೀಸ್ ಠಾಣೆಯ ಸಿ.ಪಿ,ಐ. ಸುರೇಶ್ ಖಡಕ್ ಎಚ್ಚರಿಕೆ ನೀಡಿದರು. ಪಾವಗಡ ಪಟ್ಟಣದ ಎಸ್ ಎಸ್ ಕೆ ಹಳೆ ಛತ್ರದಲ್ಲಿ ತುಮಕೂರು ಜಿಲ್ಲಾ ಪೊಲೀಸ್, ಮಧುಗಿರಿ ಉಪವಿಭಾಗ, ಪಾವಗಡ ಪೊಲೀಸ್ ಠಾಣೆ ವತಿಯಿಂದ…
ಹೂವಿನ ಮಂಡಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ರೈತ ಸಂಘದಿಂದ ಶಾಸಕರಿಗೆ ಮನವಿ
ತುಮಕೂರು : ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹೂವಿನ ಮಂಡಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತುಮಕೂರು ಜಿಲ್ಲಾಧ್ಯಕ್ಷ ಪೂಜಾರಪ್ಪ ಅವರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.ಈ ಮನವಿಯು ಪಾವಗಡದ ಹೂವಿನ ಬೆಳೆಗಾರರು ಮತ್ತು ವ್ಯಾಪಾರಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮಾಡಲಾಗಿದೆ ಎಂದು ತಿಳಿಸಿದರು. ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ…
ಎಐನಿಂದ ಜಗತ್ತು ಕಿರಿದಾಗುತ್ತಿದೆ: ಪ್ರದೀಪ್ಕುಮಾರ್ ಎನ್ ಬಿ
ಎಐ-ಚಾಲಿತ ಜಗತ್ತಿನಲ್ಲಿ ಎಂಬಿಎ: ವಿಮ್ಟೆಕ್ನಿಂದ ಚಿಂತನಾತ್ಮಕ ಚರ್ಚೆ ತುಮಕೂರು: ಎಐ ಬೆಳೆಯುತ್ತಿರುವಂತೆ ವಿಶ್ವವು ಚಿಕ್ಕದಾಗುತ್ತಿದೆ, ಎಂಬಿಎ ಕೇವಲ ಪದವಿಯಲ್ಲ; ಇದು ಜಾಗತಿಕ ಅವಕಾಶಗಳಿಗೆ ಹೆಬ್ಬಾಗಿಲಾಗಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಪ್ರದೀಪ್ಕುಮಾರ್ ಎನ್ ಬಿ ಅವರು ಹೇಳಿದರು. ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಭಾಗವಾದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಟೆಕ್ನಾಲಜಿ(ವಿಮ್ಟೆಕ್) ವತಿಯಿಂದ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ “ಎಐ-ಚಾಲಿತ ಜಗತ್ತಿನಲ್ಲಿ ಎಂಬಿಎ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ…
ಪೋಲೀಸರು ಇರುವುದೇ ಸಾರ್ವಜನಿಕರ ರಕ್ಷಣೆಗಾಗಿ,ಪ್ರತಿ ಮನೆಯ ಮುಂದೆ ಸಿಸಿ ಕ್ಯಾಮರಾಹಾಕಿಸಿ ಪಿ.ಎಸ್.ಐ.ಪ್ರಸನ್ನಕುಮಾರ್
ತುಮಕೂರು:ಜಯನಗರ ಮಾರುಕಟ್ಟೆ ಪ್ರಾಂಗಣದ ಅಶ್ವತ್ಥಕಟ್ಟೆಯಲ್ಲಿ ಜಯನಗರ ಪೊಲೀಸ್ ಠಾಣೆಯಿಂದ ನಡೆದ ಜನ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಐ.ಪ್ರಸನ್ನಕುಮಾರ್.ಕೆ ರವರು ನಾಗರೀಕರು ಪೋಲೀಸರೊಂದಿಗೆ ಸದಾ ಸಹಕರಿಸಬೇಕು,ಪೋಲೀಸರು ಇರುವುದೇ ನಾಗರೀಕ ಸಮಾಜದ ರಕ್ಷಣೆಗಾಗಿ,ಕೋಟ್ಯಾಂತರ ರೂಪಾಯಿ ವ್ಯಯಿಸಿ ಸ್ವಂತ ಮನೆ ಕಟ್ಟಿಸುತ್ತೀರಿ ಆದರೆ ಅದಕ್ಕೆ ಸಿಸಿ ಕ್ಯಾಮರಾ ಹಾಕಿಸಲು ಮೀನಮೇಷ ಎಣಿಸುತ್ತೀರಿ,ನಿಮ್ಮ ರಕ್ಷಣೆಗಾಗಿ ಸಿಸಿ ಕ್ಯಾಮರಾಗಳನ್ನು ಹಾಕಿಸಿ,ಮೆನಯಿಂದ ಹೆಚ್ಚು ದಿನ ಹೊರ ಹೋಗಬೇಕೆಂದರೆ ನಿಮ್ಮ ಬಡಾವಣೆಯ ಬೀಟ್ ಪೋಲೀಸರಿಗೆ ತಿಳಿಸಿ,ಬೆಲೆಬಾಳುವ ಒಡವೆ ವಸ್ತುಗಳನ್ನು ಪೋಲೀಸರಿಗೆ ಒಪ್ಪಿಸಿ ಹೊರ ಹೋಗಿ ಬಂದ…
ಶ್ರೀ ರಾಮಾನುಜಾ ಸೇವಾ ಸಮಿತಿ(ರಿ) ವತಿಯಿಂದ ಲಕ್ಷ್ಮಿ ನರಸಿಂಹ ಜಯಂತಿ ಆಚರಣೆ
ಗುಬ್ಬಿ ಸುದ್ದಿ: ತಾಲೂಕಿನ ಕಡಬ ಹೋಬಳಿ ಕುಣಾಘಟ್ಟ ಗ್ರಾಮದಲ್ಲಿ ಇಂದು ಶ್ರೀ ರಾಮಾನುಜಾ ಸೇವಾ ಸಮಿತಿ(ರಿ) ವತಿಯಿಂದ ಲಕ್ಷ್ಮಿ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯು ಶ್ರೀ ರಾಮಾನುಜ ಸೇವಾ ಸಮಿತಿಯು ನರಸಿಂಹ ಜಯಂತಿ ಅಂಗವಾಗಿ ಪುಣ್ಯಾಹ, ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಶಾಂತಿ ಹೋಮ, ನರಸಿಂಹ ಹೋಮ, ಗಣ ಹೋಮವನ್ನು ಲೋಕ ಕಲ್ಯಾಣಾರ್ಥಕ್ಕಾಗಿ ಅಪಾರ ಭಕ್ತರ ಸಮುಖದಲ್ಲಿ ನೆರವೇರಿಸಿ ನಂತರ ಪೂರ್ಣಹೂತಿಯೊಂದಿಗೆ ಹೋಮವನ್ನು ಮುಕ್ತಾಯಗೊಳಿಸಲಾಯಿತು. ಸ್ವಾಮಿಯವರನ್ನು ಮೆರವಣಿಗೆಯ ಮೂಲಕ ಗೋವಿಂದ ಗೋವಿಂದ…
ಉದ್ಯಮಿ ಮಿತ್ರ ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದ ಸಂತೋಷ್ ಕುಮಾರ್.ಹೆಚ್.ಎನ್.
ತುಮಕೂರು:ಉದ್ದಿಮೆದಾರರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುಮಕೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯಮಟ್ಟದ ಉದ್ಯಮಿ ಮಿತ್ರ ಸಹಕಾರ ಸಂಘ ನಿಯಮಿತ ಸ್ಥಾಪನೆ ಮಾಡಲಾಗಿದೆ ಎಂದು ಉದ್ಯಮಿ ಮಿತ್ರ ಸಹಕಾರ ಸಂಘದ ಮುಖ್ಯಪ್ರವರ್ತಕ ಸಂತೋಷ್ ಕುಮಾರ್.ಹೆಚ್.ಎನ್.ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹೊಸದಾಗಿ ಉದ್ದಿಮೆ ಆರಂಭಿಸುವ ಯುವಜನರಿಗೆ ಜ್ಞಾನದ ಕೊರತೆಯಿಂದ ಕೆಲವಷ್ಟು ದಿನ ಉದ್ದಿಮೆ ನಡೆಸಿ, ನಂತರ ಬಾಗಿಲು ಹಾಕಿರುವ ಪ್ರಕರಣಗಳೇ ಹೆಚ್ಚಿವೆ.ಬಂಡವಾಳ ಹೂಡಿಕೆ, ಸಂಪನ್ಮೂಲ ಕ್ರೂಢೀಕರಣ,ಮಾರುಕಟ್ಟೆ ಇನ್ನಿತರ ಸಮಸ್ಯೆಗಳನ್ನು ಎದುರಿಸಲಾಗದೆ. ಅರ್ಧಕ್ಕೆ ಕೈಬಿಡುವ ಪ್ರಸಂಗಗಳೇ ಹೆಚ್ಚಾಗಿವೆ. ಈ ಸವಾಲುಗಳನ್ನು…
ಹಾಲಪ್ಪ ಪ್ರತಿಷ್ಟಾನ ವಿದ್ಯಾರ್ಥಿ ಯುವಜನರು ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ :ಮುರುಳೀಧರ ಹಾಲಪ್ಪ
ತುಮಕೂರು:ಪದವಿ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಬಯಸಿ, ಸ್ವಯಂ ಉದ್ಯೋಗ ಮಾಡುವ ಕನಸ್ಸುಕಾಣುತ್ತಿರುವ ಯುವಜನತೆಗೆ ಉದ್ದಿಮೆದಾರರೊಂದಿಗೆ ನೇರ ಸಂಪರ್ಕಏರ್ಪಡಿಸುವ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ಪ್ರತಿ ತಿಂಗಳಿಗೊಂದು ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿದ್ಯಾರ್ಥಿ ಯುವಜನರು ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು ನಗರದ ಕ್ರೋಮೋಡ್ ಬಯೋಟೇಕ್ ಆವರಣದಲ್ಲಿ ಅಂತಿಮ ವರ್ಷದ ಔಷಧ ವಿಜ್ಞಾನ ಮತ್ತು ಅರೆ ವೈದ್ಯಕೀಯ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ…