
ಜಿಲ್ಲಾ ಸುದ್ದಿಗಳು
ಸರ್ಕಾರಿ ದಾಖಲೆಗಳನ್ನು ಮನೆಗಳಲ್ಲಿ ಇಟ್ಟುಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ :ಟಿ.ಬಿ.ಜಯಚಂದ್ರ
ತುಮಕೂರು: ಅಧಿಕಾರಿಗಳು ನಿವೃತ್ತಿಯಾದ ನಂತರವೂ ಸರ್ಕಾರಿ ದಾಖಲೆಗಳನ್ನು ಮನೆಗಳಲ್ಲಿ ಇಟ್ಟುಕೊಂಡರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ನಡೆದ ಸಿರಾ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕು ಕಚೇರಿ ಮಾಹಿತಿಯನ್ವಯ ಶಿರಾ ತಾಲೂಕಿನಲ್ಲಿ ಜೂನ್ 24ರಂದು ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ 347 ಅರ್ಜಿಗಳು ಸಲ್ಲಿಕೆಯಾಗಿದ್ದು, 47…
2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಿದ್ಯುತ್ ಉಪಸ್ಥಾವರಗಳ ಲೋಕಾರ್ಪಣೆ
ತುಮಕೂರು: ಸುಮಾರು 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಕೊರಟಗೆರೆ ತಾಲ್ಲೂಕು ಐ.ಕೆ.ಕಾಲೋನಿ ಹಾಗೂ ತುಂಬಾಡಿ ಗ್ರಾಮಗಳ ವಿದ್ಯುತ್ ಉಪಸ್ಥಾವರಗಳನ್ನು ಸೋಮವಾರ ಸಚಿವತ್ರಯರು ಲೋಕಾರ್ಪಣೆಗೊಳಿಸಿದರು. ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿಂದು ಸಂಕೇನಹಳ್ಳಿ(ಐ.ಕೆ.ಕಾಲೋನಿ) ಹಾಗೂ ಭೈರೇನಹಳ್ಳಿ(ತುಂಬಾಡಿ) ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ 2*8 ಎಂ.ವಿ.ಎ., 66/11 ಕೆ.ವಿ. ಉಪಸ್ಥಾವರಗಳನ್ನು ಲೋಕಾರ್ಪಣೆಗೊಳಿಸಲಾಯಿತು. ನಂತರ ಮಾತನಾಡಿದ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಾಲ್ಲೂಕಿನ ಸಂಕೇನಹಳ್ಳಿ ಹಾಗೂ ಭೈರೇನಹಳ್ಳಿ ಭಾಗದ ರೈತರಿಗೆ…
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಂಕರನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ
ತಿಪಟೂರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾನೂನುಸೇವಾ ಸಮಿತಿ ಹಾಗೂ ನಗರಸಭೆ ವತಿಯಿಂದ, ನಗರದಲ್ಲಿ ಅತಿ ಹೆಚ್ಚು ಸರಕಾರಿ ಶಿಕ್ಷಕರೇ ವಾಸವಿರುವ ಶಂಕರನಗರದಲ್ಲಿ ಶಂಕರನಗರ ಹಿತರಕ್ಷಣಾ ವೇದಿಕೆ ಮತ್ತು ಶಂಕರನಗರ ಹಿತಾಸಕ್ತಿ ಮತ್ತು ಕುಂದು ಕೊರತೆಗಳ ಚಾವಡಿ ಸಹಯೋಗದೊಂದಿಗೆ ಬಡಾವಣೆಯ ದಕ್ಷಿಣ ಭಾಗದ 40 ಅಡಿ ರಸ್ತೆಗೆ ಹೊಂದಿಕೊಂಡತೆ ಇರುವ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಗೌರವನ್ವಿತ ನ್ಯಾಯಧೀಶರದ ವಿ.ದೀಪಾ ರವರು, ತಿಪಟೂರು ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ನಟರಾಜ್, ನಗರಸಭೆ…
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಂಕರನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ
ತಿಪಟೂರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾನೂನುಸೇವಾ ಸಮಿತಿ ಹಾಗೂ ನಗರಸಭೆ ವತಿಯಿಂದ, ನಗರದಲ್ಲಿ ಅತಿ ಹೆಚ್ಚು ಸರಕಾರಿ ಶಿಕ್ಷಕರೇ ವಾಸವಿರುವ ಶಂಕರನಗರದಲ್ಲಿ ಶಂಕರನಗರ ಹಿತರಕ್ಷಣಾ ವೇದಿಕೆ ಮತ್ತು ಶಂಕರನಗರ ಹಿತಾಸಕ್ತಿ ಮತ್ತು ಕುಂದು ಕೊರತೆಗಳ ಚಾವಡಿ ಸಹಯೋಗದೊಂದಿಗೆ ಬಡಾವಣೆಯ ದಕ್ಷಿಣ ಭಾಗದ 40 ಅಡಿ ರಸ್ತೆಗೆ ಹೊಂದಿಕೊಂಡತೆ ಇರುವ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಗೌರವನ್ವಿತ ನ್ಯಾಯಧೀಶರದ ವಿ.ದೀಪಾ ರವರು, ತಿಪಟೂರು ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ನಟರಾಜ್, ನಗರಸಭೆ…
ಸರಕಾರಿ ಶಾಲಾ ಮಕ್ಕಳಿಗೆ ಟ್ರಾಕ್ ಸೂಟ್ ವಿತರಣೆ.
ತಿಪಟೂರು ನ್ಯೂಸ್ ತಿಪಟೂರು ನಗರದ ಗಾಯತ್ರಿನಗರ ಸರಕಾರಿ ಶಾಲಾ ಮಕ್ಕಳಿಗೆ ಹಳೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಶಾಲೆಯ ಪುಟ್ಟ ಪುಟ್ಟ ಮಕ್ಕಳಿಗೆ ಟಾಕ್ ಸೂಟ್, ಪೆನ್ನು ಮತ್ತು ಪೆನ್ಸಿಲ್ ವಿತರಿಸಿದರು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಜೀವನ ಹಾಗೂ ವಿದ್ಯಾರ್ಥಿ ಜೀವನವನ್ನು ನೆನೆದು ಶಾಲಾ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಸರಕಾರಿ ಶಾಲೆಯಲ್ಲಿ ಓದಿದಂತಹ ಮಕ್ಕಳು ಉನ್ನತ ಅಧಿಕಾರಿಗಳಾಗಿದ್ದಾರೆ, ಸರಕಾರಿ ಶಾಲೆಯು ಸಕಲ ಸೌಲತ್ತುಗಳನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದು ಖಾಸಗಿ ಶಾಲೆಗಳ…
ಆರೋಗ್ಯವೇ ಭಾಗ್ಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ
ಗುಬ್ಬಿ : ಆರೋಗ್ಯವೇ ಭಾಗ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ ಹಣವನ್ನು ಎಷ್ಟು ಬೇಕಾದರೂ ದುಡಿಯಬಹುದು ಆದರೆ ಆರೋಗ್ಯ ಪಡೆಯುವುದು ಕಷ್ಟ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು. ಗುಬ್ಬಿ ಪಟ್ಟಣದ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಚಾಲುಕ್ಯ ಆಸ್ಪತ್ರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುಮಾರು 40 ವರ್ಷಗಳಿಂದಲೂ ಕೂಡ ರಾಜ್ಯದ…
ಜಿಲ್ಲಾಧಿಕಾರಿ ಕಚೇರಿ ಮುಂದೆ ಹಸು ಕಟ್ಟಿ, ಹಾಲು ಕರೆದು ಪ್ರತಿಭಟನೆ
ಸರ್ಕಾರದ ರೈತ ವಿರೋಧಿ ನೀತಿಗೆ ಬಿಜೆಪಿ ರೈತ ಮೋರ್ಚಾ ಖಂಡನೆ ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಸುಗಳನ್ನು ತಂದು ಕಟ್ಟಿ, ಹಾಲು ಕರೆದು ಜಿಲ್ಲಾಧಿಕಾರಿಗಳಿಗೆ ಹಾಲು ನೀಡಿ ವಿನೂತನ ಪ್ರತಿಭಟನೆ ನಡೆಸಿದರು. ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ 900 ಕೋಟಿ ರೂ. ಹಾಲಿನ ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ, ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳ…
ಕರ್ನಾಟಕದಲ್ಲಿ ಕನ್ನಡ ಅನಾಥವಾಗಬಾರದು : ಕನ್ನಡಿಗರು ಜಾಗೃತರಾಗಬೇಕು’
ಕರ್ನಾಟಕದಲ್ಲಿ ಕನ್ನಡ ಅನಾಥವಾಗಬಾರದು, ಕನ್ನಡಿಗರು ಜಾಗೃತರಾಗಬೇಕು. ಬಸವಾದಿ ಶರಣರು, ದಾಸರು, ದಾರ್ಶನಿಕರು ಕಟ್ಟಿ ಬೆಳೆಸಿದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರದಾಗಬೇಕು. ಈ ಕಾರ್ಯದಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರಧಾನ ಪಾತ್ರ ವಹಿಸಬೇಕೆಂದು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ತಿಳಿಸಿದರು. ಅವರಿಂದು ತುಮಕೂರು ನಗರದ ಕನ್ನಡ ಭವನದಲ್ಲಿ ನಡೆದ “ವೀರ ಸೌಧಾ ಮಿನಿ ಚಿತ್ರಸಂಪುಟ” ಬಿಡುಗಡೆಗೊಳಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಕನ್ನಡವನ್ನು ಉಳಿಸುವ ಕೆಲಸಗಳು…
ಪರವಾನಗಿ ಇಲ್ಲದೆ ಅನಧಿಕೃತ ಮಿಶ್ರಣ ರಸಗೊಬ್ಬರ ಉತ್ಪಾದನೆ, ದಾಸ್ತಾನು, ಮಾರಾಟ-ಜಪ್ತಿ:
ತುಮಕೂರು ದಿನಾಂಕ : 26.06.2024ರಂದು ಕರ್ನಾಟಕ ಆಗ್ರೋ ಕೆಮಿಕಲ್ಸ್, ಮಧುಗಿರಿ ರಸ್ತೆ, ತುಮಕೂರು ನಗರದ ರಸಗೊಬ್ಬರ ಉತ್ಪಾದನಾ ಘಟಕದಲ್ಲಿ ಇಲಾಖೆಯಿಂದ ಅನುಮತಿ ಪಡೆಯದೇ -ಪರವಾನಗಿ ಇಲ್ಲದೆ-ಅನಧಿಕೃತವಾಗಿ ಉತ್ಪಾದನೆ ಮಾಡಿ ದಾಸ್ತಾನು ಮಾಡಿದ್ದ 50 Kg., ತೂಕದ 220 bags(11 ಟನ್ ಅಂದಾಜು ಮೊತ್ತ 1.23 ಲಕ್ಷ) ಗಳ ಲಘು ಪೋಷಕಾಂಶ ಮಿಶ್ರಣ (ಕ್ಯಾಲ್ಷಿಯಂ-23%, ಮೆಗ್ನಿಷಿಯಂ-2%, ಗಂದಕ-5%) ಸಮೃದ್ಧಿ ರಸಗೊಬ್ಬರವನ್ನು ಮಹಜರ್ ಮೂಲಕ ಮಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ಮಾದರಿಯನ್ನು ತೆಗೆದು…
ಕಲ್ಲೂರು ಗ್ರಾಮ ಪಂಚಾಯಿತಿ ಚುನಾವಣೆ .
ಗುಬ್ಬಿ ಸುದ್ದಿ. ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಜಿಲ್ಲೆಯ ಮೂರು ಶಾಸಕರ ಧಯೆ.ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜುಲೇಖಾಬಿ ಯೂಸುಫ್. ಅಲ್ಪಸಂಖ್ಯಾತ ಸಮುದಾಯವರು ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಧಿ ಅಲಂಕರಿಸಲು ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ.ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್. ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜುರವರು ಎಂದು ಕಲ್ಲೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜುಲೇಖಾಬಿ ಯೂಸುಫ್ ಸಂತಸ ವ್ಯಕ್ತಪಡಿಸಿದರು. ಕಲ್ಲೂರು ಗ್ರಾಮ ಪಂಚಾಯಿತಿ ಗೆ…