ಸಾಲದ ಬಡ್ಡಿಯ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ವ್ಯಕ್ತಿಯ ಬಂಧನ
ದಿನಾಂಕ:-05/09/2024 ರಂದು ಮಧ್ಯ ರಾತ್ರಿ ವೇಳೆಯಲ್ಲಿ ಗುಬ್ಬಿ ತಾಲ್ಲೂಕು ಹೇರೂರು ಗ್ರಾಮದ ಸಿ.ಐ.ಟಿ ಕಾಲೇಜಿನ ಮುಂಭಾಗವಿರುವ ಕೇಕ್ ಹೌಸ್ ನಲ್ಲಿ ಬಸವರಾಜು ಬಿನ್ ನಂಜೇಗೌಡ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು. ನಂತರ ಮೃತ ಬಸವರಾಜು ರವರ ಮೊಬೈಲ್ ನ್ನು ಪರಿಶೀಲಿಸಲಾಗಿ ಆತ್ಮಹತ್ಯೆಗೆ ಕಾರಣ ಹೇರೂರು ಗ್ರಾಮದ ವಾಸಿಯಾದ ನಾಗರಾಜು @ ಬಡ್ಡಿ ನಾಗ ಈತನು ತಾನು ಕೊಟ್ಟ ಸಾಲಕ್ಕಾಗಿ ಬಸವರಾಜು ರವರಿಂದ ಚೆಕ್ ಗಳನ್ನು ಪಡೆದುಕೊಂಡಿದ್ದು, ಚೆಕ್ ಗಳನ್ನು ವಾಪಸ್ ಕೊಡುವಂತೆ ಕೇಳಿದಾಗ ಬಸವರಾಜು ರವರನ್ನು ಬೆದರಿಸಿ ಆತ್ಮಹತ್ಯೆ…